Friday, September 12, 2008

ಪ್ರಕಟಣೆ - ೨೯



ಛಂದ ಪುಸ್ತಕ ಸಂಭ್ರಮ

ಮಾನ್ಯರೆ,

ಕುಂವೀ ಕನ್ನಡ ಸಾಹಿತ್ಯ ಲೋಕ ಕಂಡ ವಿಶಿಷ್ಟ ಕತೆಗಾರ. ಬೆಚ್ಚಿ ಬೀಳಿಸುವ ಲೋಕವೊಂದನ್ನು ತನ್ನ ವಿಕಟ ನಿರೂಪಣೆಯಿಂದಲೇ ಬಿಚ್ಚಿಟ್ಟ ದಿಟ್ಟ ಕತೆಗಾರ. ಕತೆ ಹೇಳಲು ಎಂದೂ ಆಯಾಸಗೊಳ್ಳದ ಸೃಜನಶೀಲತೆಯ ಅಕ್ಷಯ ಪಾತ್ರೆ.

ಈ ಅಪರೂಪದ ಕತೆಗಾರನ ಜೊತೆ ಈ ಭಾನುವಾರದ ಸಂಜೆಯನ್ನು ಕಳೆಯಲು ಚಂದ ಪುಸ್ತಕವು ಅವಕಾಶ ಮಾಡಿ ಕೊಡುತ್ತಿದೆ. ಮಳೆಯ ನೆಪವೊಡ್ಡದೆ ದಯವಿಟ್ಟು ಬನ್ನಿ.

ದಿನಾಂಕ: ೧೪ ನೇ ಸೆಪ್ಟೆಂಬರ್ ೨೦೦೮ ಭಾನುವಾರ
ವೇಳೆ: ಸಂಜೆ ೩.೩೦ ಗೆ
ಸ್ಥಳ: ಎನ್.ಎಮ್.ಕೆ.ಆರ್.ವಿ. ಮಹಿಳಾ ಕಾಲೇಜು.
ಶಾಶ್ವತಿ ಸಭಾಂಗಣ
ಜಯನಗರ ೩ ನೇ ಬ್ಲಾಕ್.
ಬೆಂಗಳೂರು- ೧೧

ಹೆಚ್ಚಿನ ವಿವರಗಳಿಗೆ ಲಗತ್ತಿಸಿದ ಚಿತ್ರವನ್ನು ನೋಡಿ ಅಥವಾ ಈ ಲಿಂಕನ್ನು ಕ್ಲಿಕ್ಕಿಸಿ
http://raghuapara.blogspot.com/2008/09/blog-post_08.html

ನಿಮ್ಮ ನಿರೀಕ್ಷೆಯಲ್ಲಿ,
--ವಸುಧೇಂದ್ರ

Wednesday, September 3, 2008

ಪ್ರಕಟಣೆ - ೨೮


ಅವಿರತ
ನಾಡಿಗಾಗಿ ನಿರಂತರ

ಅವಿರತ ನ್ಯಾಸದ ವತಿಯಿಂದ ಪೂರ್ಣಚಂದ್ರ ತೇಜಸ್ವಿಯವರ ಹುಟ್ಟುಹಬ್ಬದ ಪ್ರಯುಕ್ತ ಕಾರ್ಯಕ್ರಮಗಳು

ದಿನಾಂಕ: ೭ ಸೆಪ್ಟೆಂಬರ್ ೨೦೦೮ ಭಾನುವಾರ

ಸಂಜೆ ೪ ರಿಂದ ೫ -- ಅತಿಥಿಗಳಿಂದ ತೇಜಸ್ವಿ ಬಗ್ಗೆ ಒಂದು ಮಾತು
ಸಂಜೆ ೫ ರಿಂದ ೫.೩೦ -- ಕುವೆಂಪು ಗೀತ ಗಾಯನ
ಸಂಜೆ ೫.೩೦ ರಿಂದ ೬.೩೦ -- ಅವಿರತ ತಂಡಸಿಂದ ತೇಜಸ್ವಿ ಕಥಾ ಕನವರಿಕೆ
(ತೇಜಸ್ವಿಯವರ ಕಥೆಗಳಲ್ಲಿ ಬರುವ ಹಾಸ್ಯ ಪ್ರಸಂಗಗಳ ವಾಚನ)
ಸಂಜೆ ೬.೩೦ ಯಿಂದ ೮.೦೦ -- ತೇಜಸ್ವಿಯವರ ನಾಟಕ 'ಕಿರಗೂರಿನ ಗಯ್ಯಾಳಿಗಳು'
ತಂಡ: ರೂಪಾಂತರ ನಾಟಕ ರೂಪ
ನಿರ್ದೇಶನ: ಅ. ನಾ. ರಾವ್ ಜಾಧವ್
ಸ್ಥಳ: ಡಾ. ರಾಜ್ ಕುಮಾರ್ ಕಲಾಕ್ಷೇತ್ರ
ಆರ್.ಟಿ.ಓ ಕಛೇರಿ ವಾಣಿಜ್ಯ ಸಂಕೀರ್ಣ, ರಾಜಾಜಿನಗರ, ಬೆಂಗಳೂರು
ಟಿಕೇಟಗಳಿಗಾಗಿ ಸಂಪರ್ಕಿಸಿ:
ಸತೀಶ್ ಗೌಡ [೯೮೮೦೦ ೮೬೩೦೦]

Thursday, August 7, 2008

ಪ್ರಕಟಣೆ - ೨೭

ವಿಕಲಚೇತನ ಸೇವಾ ಸಂಸ್ಥೆ
ಆತ್ಮೀಯ ಆಮಂತ್ರಣ
ಸ್ನೇಹ ಮಿಲನ - ೨೦೦೮
ಆತ್ಮೀಯರೇ,
ತಮ್ಮ ಉದಾರ ಮನಸ್ಸಿನ ಸಹಾಯ ಹಸ್ತದಿಂದ ಹಲವಾರು ವಿಕಲಚೇತನರು ಸ್ವತಂತ್ರ ಜೀವನ ನಡೆಸುವ ಮಾರ್ಗದಲ್ಲಿ ಹೆಜ್ಜೆ ಹಾಕುತ್ತಿದ್ದಾರೆ.

ಸಹೃದಯರೇ, ಈ ದಿಸೆಯಲ್ಲಿ ನಮ್ಮ ಸಂಸ್ಥೆ ನಿಮಗಾಗಿ ಸ್ನೇಹ ಮಿಲನ ಕಾರ್ಯಕ್ರಮವನ್ನು ಏರ್ಪಡಿಸಿದೆ.ಈ ಶುಭ ಸಂದರ್ಭದಲ್ಲಿ ವಿಕಲಚೇತನರಲ್ಲಿ ಅಡಗಿರುವ ಸುಪ್ತ ಪ್ರತಿಭೆಯ ಪರಿಚಯವನ್ನು ತಮಗೆ ಮಾಡಿಸುವ ಉದ್ದೇಶ ನಮ್ಮದು.

ನಿಮ್ಮ ಸ್ನೇಹದ ಕೊಂಡಿಗಳನ್ನು ಮತ್ತಷ್ಟು ಬಲ ಪಡಿಸುವ ಉದ್ದೇಶದಿಂದ ಸಂಯೋಜಿಸಲಾಗಿರುವ ಈ ವಿಶೇಷ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಯಶಸ್ಸಿನ ಸಿಂಚನವನ್ನು ಎರೆಯಬೇಕಾಗಿ ವಿನಂತಿ.

ತಾರೀಖು: ಅಗಸ್ಟ್ ೧೦ ೨೦೦೮ , ಭಾನುವಾರ
ಸ್ಥಳ: ಬಿ.ಎಂ.ಶ್ರೀ.ಪ್ರತಿಷ್ಠಾನ, ೩ ನೇ ಮುಖ್ಯ ರಸ್ತೆ, ನರಸಿಂಹರಾಜ ಕಾಲೋನಿ ಬೆಂಗಳೂರು - ೫೬೦ ೦೧೯
ಸಮಯ: ಬೆಳಿಗ್ಗೆ ೧೦ ರಿಂದ ಮಧ್ಯಾಹ್ನ ೧.೩೦ ರ ವರೆಗೆ
ಭೋಜನ: ಮಧ್ಯಾಹ್ನ ೧.೩೦ ಕ್ಕೆ

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
ಎನ್. ಕೃಷ್ಣಮೂರ್ತಿ (ಎನ್.ಕೆ): ೯೪೪೯೩ ೪೨೯೪೦ [94493 42940]
--ವಂದನೆಗಳೊಂದಿಗೆ,
ಮಾರ್ಗದರ್ಶಿ ಕಾರ್ಯಕಾರಿ ಸಮಿತಿ

Tuesday, July 29, 2008

ಪ್ರಕಟಣೆ - ೨೬

ಸಾಹಿತ್ಯ ಸಂಸ್ಕೃತಿ ಪ್ರಕೃತಿ
ನುಡಿವ ವೀಣೆ ಕರ್ನಾಟಕ ಶಾಸ್ತ್ರೀಯ ಸಂಗೀತ ಸಂಜೆ

ವೀಣೆ: ವೈಣಿಕ ವಿದೂಷಿ ಹೆಚ್.ಕೆ.ಬಾಲಸರಸ್ವತಿ
ಮೃದಂಗ: ಡಾ ಹೆಚ್.ಎಸ್.ವೆಂಕಟೇಶ್
ಖಂಜರ್: ಶ್ರೀ ಭಾರ್ಗವ

ದಿನಾಂಕ: ೦೨ ಆಗಸ್ಟ್ ೨೦೦೮ ಶನಿವಾರ
ಸಮಯ: ಸಂಜೆ ೫.೩೦ ರಿಂದ ೭.೩೦ ರ ವರೆಗೆ
ಸ್ಥಳ: ಇಂಡಿಯನ್ ಇನ್ಸ್‌ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್‌
ಬಸವನಗುಡಿ. ಬೆಂಗಳೂರು - ೦೪

ಎಲ್ಲರಿಗೂ ಪ್ರಣತಿ ತಂಡದಿಂದ ನಲ್ಮೆಯ ಸ್ವಾಗತ

ಪ್ರಕಟಣೆ- ೨೫


"ಸಮಾಜ ಸೇವಕರ ದಿನಾಚರಣೆ"
ಆಗಸ್ಟ್ ೧, ೨೦೦೮

ಸಮಾಜ ಸೇವಕರ ಸಮಿತಿಯ
ಆರನೆಯ ವಾರ್ಷಿಕೋತ್ಸವ ಸಮಾರಂಭ

ಅಧ್ಯಕ್ಷತೆ
ಡಾ ಆರ್. ಗಣೇಶ್ ಶತಾವಧಾನಿಗಳು
ಶ್ರೀ ಡಿ.ವಿದ್ಯಾಸಾಗರ್
ಶ್ರೀ ಹೆಚ್.ಸಿ.ಮಧುಸೂದನ್ ರಾವ್
--------------------------------------------------------------
-:ಸಾಂಸ್ಕೃತಿಕ ಕಾರ್ಯಕ್ರಮಗಳು:-

ಭಾವಗೀತೆಗಳ ಗಾಯನ
ಡಾ ರೋಹಿಣಿ ಮೋಹನ್ ಮತ್ತು ಶ್ರೀ ಪಂಚಮ್ ಹಳಿಬಂಡಿಯವರಿಂದ

ಪಕ್ಕವಾದ್ಯದಲ್ಲಿ
ಕೀಬೋರ್ಡ್ - ಶ್ರೀ ನವನೀತ್
ತಬಲ - ಶ್ರೀ ಹನುಮಂತ ಕಾರಟಗಿ

ಸಮಾಜ ಸೇವಕರ ಸಮಿತಿಯ ವೆಬ್-ಸೈಟ್ ಅನಾವರಣ

ದಿನಾಂಕ: ಆಗಸ್ಟ್ ೧, ೨೦೦೮ ಶುಕ್ರವಾರ
ಸಮಯ: ಸಂಜೆ ೫.೩೦ ರಿಂದ ೮.೦೦ ಗಂಟೆವರೆಗೆ
ಸ್ಥಳ: ನಯನ ಸಭಾಂಗಣ, ಕನ್ನಡ ಭವನ. ಜೆ.ಸಿ ರಸ್ತೆ. ಬೆಂಗಳೂರು - ೦೨

ಎಲ್ಲರಿಗೂ ಮುಕ್ತ ಹೃದಯದ ಸ್ವಾಗತ
ಸ್ವಾಗತ ಬಯಸುವವರು ಸಮಾಜ ಸೇವಕರ ಸಮಿತಿ ಎಲ್ಲಾ ಸದಸ್ಯರು


Wednesday, July 16, 2008

ಪ್ರಕಟಣೆ - ೨೪




ಆತ್ಮೀಯ ಗೆಳೆಯ/ಗೆಳತಿಯರೇ,

ಅಕ್ಕರೆಯ ಅಕ್ಷರ ಬಂಧುಗಳೆ, ನಿಮಗೆಲ್ಲ ಆತ್ಮೀಯ ಸ್ವಾಗತ

ಎಲ್ಲಿಗೆ: ಸುಚಿತ್ರಾ ಫಿಲ್ಮ್ ಸೊಸೈಟಿ, ಬನಶಂಕರಿ ೨ನೇ ಹಂತ. ಬೆಂಗಳೂರು.
ಎಂದು: ಜುಲೈ ೨೭ ನೇ ತಾರೀಖು ೨೦೦೮, ಭಾನುವಾರ.
ಸಮಯ: ಬೆಳಿಗ್ಗೆ ೧೦ ಗಂಟೆಗೆ

ಎರಡು ಅಕ್ಷರನೌಕೆಗಳ ಅಭಿಯಾನದಾರಂಭ ಸಮಾರಂಭ

ಪುಸ್ತಕಗಳು:
೧. ತುಳಸಿವನ - ಲಘು ಪ್ರಬಂಧ ಸಂಕಲನ
ಲೇಖಕಿ : ತುಳಸಿಯಮ್ಮ ಖ್ಯಾತಿಯ ತ್ರಿವೇಣಿ ಶ್ರೀನಿವಾಸ್

೨. ಭಾವಬಿಂಬ - ಕವನ ಸಂಕಲನ
ಲೇಖಕಿ: ಸುಪ್ತದೀಪ್ತಿ ಕಾವ್ಯನಾಮದ ಜ್ಯೋತಿ ಮಹಾದೇವ

ಅತಿಥಿಗಳು:
೧. ಶ್ರೀ ದೊಡ್ಡರಂಗೇಗೌಡ (ಕವಿ, ಚಿತ್ರ ಸಾಹಿತಿ ಮತ್ತು ವಿಧಾನ್ ಪರಿಷತ್ ಸದಸ್ಯರು)
೨. ಶ್ರೀ ಡಾ|| ಹೆಚ್.ಎಸ್.ವೆಂಕಟೇಶಮೂರ್ತಿ (ಕವಿ)
೩. ಶ್ರೀ ಗಿರೀಶ್.ಹೆಚ್.ರಾವ್ (ಜೋಗಿ)

ಆಹ್ವಾನ ಪತ್ರಿಕೆಗಾಗಿ ಚಿತ್ರ ನೋಡಿ.

--ಸ್ನೇಹದಿಂದ,
ತ್ರಿವೇಣಿ

ಪ್ರಕಟಣೆ - ೨೩




ಸ್ನೇಹಿತರೆ,

ಎರಡು ವರ್ಷಗಳ ಹಿಂದೆ ಬಿಡುಗಡೆಯಾಗಿ ಜನರ ಮತ್ತು ವಿಮರ್ಶಕರ ಮೆಚ್ಚುಗೆ ಗಳಿಸಿದ 'ಮಠ' ಚಿತ್ರದ ಬಗ್ಗೆ ಬಹಿರಂಗ ಚರ್ಚೆಗಳೇನೂ ಆಗಲಿಲ್ಲ. ಮೊಟ್ಟ ಮೊದಲ ಬಾರಿಗೆ ಕಲಾತ್ಮಕ ಮತ್ತು ವಾಣಿಜ್ಯ ಚಿತ್ರಗಳ ಗುಣಾತ್ಮಕ ಅಂಶಗಳ Fly Over ಅಂತ ಅನಿಸಿಕೊಂಡಿದ್ದು ಮಠ ಚಿತ್ರದ ಹೆಗ್ಗಳಿಕೆ.

ಮೌಲಿಕ ಕೃತಿ ಅಥವಾ ಚಿತ್ರದ ಬಗ್ಗೆ ಚರ್ಚೆ-ಸಂವಾದಗಳೇ ಕಡಿಮೆಯಾಗಿರುವ ಈ ದಿನಗಳಲ್ಲಿ ಇಗೋ 'ಕನ್ನಡಸಾಹಿತ್ಯ.ಕಾಂ'ನ ಈ ಪ್ರಯತ್ನ ನಿಮಗಾಗಿ

'ಮಠ' ಚಿತ್ರ ಪ್ರದರ್ಶನ ಮತ್ತು ಸಂವಾದ

ಅವತ್ತು ನಿಮ್ಮೊಂದಿಗಿರುವವರು: ಮಠ ಚಿತ್ರದ ನಿರ್ದೇಶಕ ಗುರುಪ್ರಸಾದ, ಕಲಾವಿದರು, ತಂತ್ರಜ್ಞರು

ಪ್ರದರ್ಶನ ಎಲ್ಲಿ? ವಿಳಾಸ?

‘ಶ್ರೀಗಂಧ ಪ್ರಿವ್ಯೂ ಥಿಯೇಟರ್’ (ರೇಣುಕಾಂಬ)
ಲಾವಣ್ಯ ಟವರ್ಸ್
ನಂ ೫೯, ೪ ನೆ ಮುಖ್ಯ ರಸ್ತೆ,
೧೮ ನೆ ಆಡ್ಡರಸ್ತೆ
ಮಲ್ಲೇಶ್ವರಂ
ಬೆಂಗಳೂರು- ೫೬೦ ೦೫೫

ದಿನಾಂಕ: ೨೦ ನೇ ಜುಲೈ ೨೦೦೮ ರವಿವಾರ
ಸಮಯ : ಮಧ್ಯಾಹ್ನ ೧ ಗಂಟೆಗೆ

ಹೆಚ್ಚಿನ ವಿವರಗಳು ಮತ್ತು ನಿಮ್ಮ ಆಸನ ಕಾದಿರಿಸಲು ಸಂವಾದ.ಕಾಂ ನ 'ಮಠ' ವಿಶೇಷ ಪುಟಕ್ಕೆ ಭೇಟಿ ಕೊಡಿ.


ಕನ್ನಡಸಾಹಿತ್ಯ.ಕಾಂ ಬಳಗ

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
೯೯೦೦೪೩೯೯೩೦ (ರವಿ ಅರೇಹಳ್ಳಿ)
೯೯೦೧೩೯೯೬೭೧ (ರಾಘವ ಕೋಟೇಕರ್)
೯೭೩೧೭೫೫೯೬೬ (ಎಂ ಕಿರಣ್, ಬೆಂಬಲಿಗರ ಬಳಗದ ನಿರ್ವಾಹಕರು)

Disclaimer (ಮಿಸ್-ಕ್ಲೇಮರ್)

ಪ್ರಕಟಣೆಯನ್ನು ಕಳಿಸಿದವರಿಗೆ ಪತ್ರ ವ್ಯವಹಾರ ಮಾಡಿಯೇ ನಂತರ ಅವರ ಅನುಮತಿ ಪಡೆದುಕೊಂಡು ಪ್ರಕಟಿಸುತ್ತಿದ್ದೇನೆ. ಕೆಲವೊಂದು ಆಮಂತ್ರಣಗಳು ಖಾಸಗಿಯಾಗಿರಲೂ ಸಾಧ್ಯ. ಅಂತಹುಗಳಿಗೆ ಕರೆ ಮಾಡಿ ಖಾತ್ರಿ ಪಡೆದುಕೊಂಡೇ ಪ್ರಕಟಿಸುತ್ತಿದ್ದೇವೆ. ನಮ್ಮೆಲ್ಲರ ಪ್ರಯತ್ನದ ಮೇಲೆಯೂ ತಪ್ಪು ಘಟಿಸದಿರಲಿ ಎಂಬಂತೆ ಇದೊಂದು
Disclaimer:
"ಕೀಟಲೆ ಮಾಡೋರು, ಏಪ್ರಿಲ್ ಫೂಲ್ ಮಾಡೋರ ಬಗ್ಗೆ ನಾವು ಜವಾಬ್ದಾರರಲ್ಲ"